Ad imageAd image

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ 

SD Editor
1 Min Read
ಸತ್ಯದರ್ಶಿನಿ ಸುದ್ದಿ ತುಮಕೂರು: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಕೊಲೆ ಮಾಡಿದ ಆರೋಪಿಗೆ ತುಮಕೂರು ಜಿಲ್ಲಾ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದ ಈರಣ್ಣ ಎಂಬ ಯುವಕ ಅದೇ ಗ್ರಾಮದ ಯುವತಿ ಕಾವ್ಯಗಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ ನೀನು ಮದುವೆಯಾಗು ಎಂದು ಬಲವಂತ ಪಡಿಸಿದ್ದ.
ಕಾವ್ಯ ಅದಕ್ಕೆ ನಿರಾಕರಿಸಿದರಿಂದ ದಿನಾಂಕ 05-04-2021ರ ಬೆಳಗ್ಗೆ ಆಕೆಯನ್ನು ಕುಡುಗೊಲಿನಿಂದ ಮುಖಕ್ಕೆ, ಕುತ್ತಿಗೆ ಹಾಗೂ ಮುಂಗೈಯನ್ನು ಕೊಚ್ಚಿ ಕೊಲೆ ಮಾಡಿದ್ದ .
ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಕಳ್ಳಂಬೆಳ್ಳ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಈರಣ್ಣ ತಪ್ಪಿತಸ್ಥ ಎಂದು ತೀರ್ಮಾನಿಸಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 20000 ರೂ. ದಂಡ ವಿಧಿಸಿ ತೀರ್ಪು ನೀಡಿದೆ ಸರ್ಕಾರದ ಪರವಾಗಿ ಶ್ರೀಮತಿ ಆರ್‌ಟಿ ಅರುಣ ವಾದ ಮಂಡಿಸಿದ್ದರು.

Share this Article